Skip to main content

೮೦ರ ದಶಕದ ಸೋಶಿಯಲ್ ಮೀಡಿಯಾ । Social Media of 80's

Karanth of Kalakshetra canteen social media for us since late 80s till Facebook came... Fond memories...
ಕಾರಂತರು ನನಗೆ ಕಲಾಕ್ಷೇತ್ರ ಗೊತ್ತಿರೋ ಸಮಯದಿಂದ ಗೊತ್ತಿದಾರೆ. ಇವರು ಕಲಾಕ್ಷೇತ್ರಕ್ಕೆ ರೆಗ್ಯುಲರ್ ಆಗಿ ಬರೋರಿಗೆ ಪರಿಚಯ ಇದ್ದೇ ಇರ್ತಾರೆ. ಮೊದಲು ಕಲಾಕ್ಷೇತ್ರದ ಎಡಭಾಗದಲ್ಲಿ ಇರುವ ಪ್ರವೇಶದ್ವಾರದಲ್ಲಿ ಕ್ಯಾಂಟೀನ್ ಇಟ್ಟಿದ್ರು. ಆಮೇಲೆ
ಈಗ ತಾಲೀಮು ಕೊಠಡಿ ಹತ್ರ ಬಂದಿದಾರೆ. ಸ್ವಲ್ಪ ಹೊಟ್ಟೆ ದೊಡ್ಡದಾಗಿದೆ. ಅಷ್ಟೇ ದೊಡ್ಡ ಮನಸ್ಸು, ಮಗುಗೆ ಇರುವ ಕುತೂಹಲ ಎಲ್ಲ ವಿಷಯದ ಬಗ್ಗೆ. ಕಲಾಕ್ಷೇತ್ರದ ಸ್ಥಳ ಮಹಾತ್ಮೆ ಇವರ ಅಧ್ಯಾಯ ಇಲ್ಲದೆ ಮುಗಿಯೋದಿಲ್ಲ.
ನಾವೆಲ್ಲ ಆಗ ಹದಿಹರೆಯದ ಬಿಸಿ ರಕ್ತದ ಯುವಕರು ಅಲ್ಲ ಪಡ್ಡೆ ಹುಡುಗರು. ಓದು ಅಂತ ಫೀಸ್ ಕಟ್ಟಿ ಕಾಲೇಜ್ ನಲ್ಲಿ ಓದಿ ಉದ್ಧಾರ ಆಗ್ತಿದಾನೆ ಅಂತ ಹೆತ್ತವರು ಅಂದುಕೊಂಡಿರುವಾಗ, ನಾವೆಲ್ಲಾ ಕಾರಂತರ ಜೊತೆ ಅವನು ಬಂದಿದ್ನಾ? ಈ ಕವರ್ ಅವನಿಗೆ ಕೊಟ್ಟುಬಿಡಿ, ಅವನು ಬಂದ್ರೆ ನಾನು ಮನೆಗೆ ಹೋದೆ ಅಂತ ಹೇಳಿ ಇತ್ಯಾದಿ ಮೆಸೇಜ್ ಬಿಡೋ ವಾಟ್ಸಾಪ್ ಆಗಿದ್ರು. ರೀ ನಿಮಗೆ ಗೊತ್ತಾ ಅವನು ಆ ನಾಟಕ ಅಥವಾ ತಂಡ ಬಿಟ್ಟ ಇತ್ಯಾದಿ ಬ್ರೇಕಿಂಗ್ ನ್ಯೂಸ್ ಕೊಡ್ತಿದ್ದ ಟ್ವಿಟ್ಟರ್ ಆಗ್ತಿದ್ರು, ನೋಡಿ ಈ ನಾಟಕ ನಮ್ಮ ಕಡೆಯವರದ್ದು ಅಂತ ಜಾಹೀರಾತು ನೀಡುವ ಫೇಸ್ಬುಕ್ ಆಗಿದ್ರು... ಕೈಸಾಲ ಕೊಡುವ paytm ಆಗಿದ್ರು... ನಮ್ಮಿಂದ ಅಥವಾ ನಮ್ಮ ದುಡ್ಡು ಬೇರೆಯವರಿಂದ ಹಸ್ತಾಂತರ ಮಾಡುವ online ಬ್ಯಾಂಕ್ ಆಗಿದ್ರು... ನಾವು ಪಾಪ ಅಕೌಂಟ್ ಇತ್ತು ಸುಮಾರ್ ಯಾಮಾರ್ಸಿದೀವಿ ಇವರನ್ನ... ಆದ್ರೂ ಇವತ್ತೂ ಕೂಡ ಅದೇ ಸ್ನೇಹದಿಂದ ಮಾತಾಡಿಸ್ತಾರೆ, ಹೋಗಿ ಕಲಾಕ್ಷೇತ್ರಕ್ಕೆ, ಕ್ಯಾಂಟೀನ್ ನಲ್ಲಿ ಅರ್ಧ ಟೀ ತೊಗೊಂಡು ಉಭಯಕುಶಲೋಪರಿ ಮಾಡಿ ಬನ್ನಿ...

Comments

Popular posts from this blog

ಸಂವಿ ಹೇಳಿಕೊಟ್ಟ ಪಾಠಗಳು | Tribute to Sanchari Vijay

ಸಂಚಾರಿ ವಿಜಯ್ ಸಂಸ್ಮರಣಾ ಕಾರ್ಯಕ್ರಮ, ಚಲನಚಿತ್ರೋತ್ಸವ, ನಾಟಕೋತ್ಸವ ಸೆಪ್ಟಂಬರ್ 29, 30 ಮತ್ತು ಅಕ್ಟೋಬರ್ 1, 2022 ರಂದು ಕುವೆಂಪು ಕಲಾಮಂದಿರ ಚಿಕ್ಕಮಗಳೂರಿನಲ್ಲಿ ನಡೆದಿತ್ತು, ಆ ಕಾರ್ಯಕ್ರಮದಲ್ಲಿ ಪ್ರಕಟವಾದ ಸ್ಮ್ರತಿ ಸರಣಿಗಾಗಿ ಬರೆದ ಲೇಖನ. ಸಂವಿ ಹೇಳಿಕೊಟ್ಟ ಪಾಠಗಳು ಸಂವಿ ಅಂದರೆ ಸಂವಿಧಾನ ಅಲ್ಲ, ಅದು ನಮ್ಮ ಸಂಚಾರಿ ವಿಜಯ್ಗೆ ನಾನು ಇಟ್ಟ ಹೆಸರು. ಸಂವಿ ವಿಧಾನಗಳು ಬಲು ಅಪರೂಪ. ನನ್ನ ಜೊತೆಯ ಒಡನಾಟ ಬಲು ಕಡಿಮೆ ಎನ್ನಬಹುದು ಕೆಲವೇ ವರ್ಷಗಳ ಪರಿಚಯವಾದರೂ ಬಾಲ್ಯ ಸ್ನೇಹಿತ ಅನ್ನೋ ಅಷ್ಟು ಆಪ್ತ. ನಮ್ಮ ಜೊತೆ ನಮ್ಮವನಾಗಿ ಇರೋ ಈ ವಿಜಯ್ ಎಲ್ಲರಿಗೂ ಮಾದರಿಯಾಗಿದ್ದ.  ನಮ್ಮ ತಂಡದ ಜೊತೆಗೆ ನಾಟಕ ಮಾಡಿದಾಗ ಸಾರ್ ನನಗೆ culture shock ಆಗಿದೆ ಅಂದ. ಏಕೆ ಎಂದರೆ ನಮ್ಮ ನಾಟಕದ ಸಂಭ್ರಮ ನಾಟಕ ಸ್ಟೇಜ್ ಮೇಲೆ ತರೋದು ಒಂದೇ ಅಲ್ಲ, ರಿಹರ್ಸಲ್ ನಲ್ಲಿ ನಡೆಯೋ ಫೈನ್ ಕಲೆಕ್ಷನ್ ಮತ್ತೆ ಬೊಂಡಾ ಬಜ್ಜಿಗಳು, ಕಾಸ್ಟ್ ಪಾರ್ಟಿಗಳು, ರಸ ಸಂಜೆಗಳು, ಇದೆಲ್ಲಾ ಏನ್ ಸಾರ್ ಅಂತ ಆಶ್ಚರ್ಯದಿಂದ ನೋಡುತ್ತಿದ್ದ.  ಎಲ್ಲವನ್ನೂ ಒಂದೇ ತರಹ, ಎಲ್ಲರನ್ನೂ ಒಂದೇ ತರಹ ನೋಡುತ್ತಿದ್ದ ಸಂವಿ ನಮಗೆ ಕಲಿಸಿದ ಮೊದಲ ಪಾಠ. ಕಲಾ ಸೌಧದ ಹೊರಗಿನ ಪೌರಕಾರ್ಮಿಕರಿಂದ, ಸಿಕ್ಕಾಪಟ್ಟೆ ಫೇಮಸ್ ಆದ ನಟರಜೊತೆ ಅದೇ ಆದರ, ವಿನಯದಿಂದ ಮಾತಾಡುತ್ತಿದ್ದ. ಒಮ್ಮೆ ನಮ್ಮ ಸಿಬ್ಬಂದಿ ಯಾರದ್ದೋ ಜೊತೆ ಜಗಳ ಮಾಡಿಕೊಂಡಾಗ ಎಲ್ಲಿಂದಲೋ ಬಂದ ಅಜಾತ ಶತ್ರು ಸಂವಿ ಇಬ್ಬರಿಗೂ ಸಮಾಧಾನ ...

I The Revenant!! (I live to tell the tale)

I really have no idea what to title this, tryst with destiny, final minutes, death at doorstep, light after darkness, reincarnation, second life, how I cheated death, My Life = 1300 Rs, I The Revenant, Sea rescue... But I am sure why I am writing this, I do not want to forget anything which happened on this day. It was early hours of Sunday, December 18, 2016, day after we had Mahpeede Mahablu show in Baindur.  We wanted to go to the beach till sun rises, come back get ready and leave to Bangalore at any cost before 10 AM after breakfast at 9 AM.  So we slept late, since we were in the same beach till 11 PM.  We went in at around 6.30 AM and tried to get into the sea at point 2 in the image below.  Later we realised that the current here is too much of the Sumana or Baindur river, force of the river was enough to make the sea water less salty.  This is clear sign that the current is super strong.  Looking for a suitable location, we moved to location...

Readers in Home Theatre 1

ಹೋಮ್ ಥೀಯೇಟರ್ ಒಂದನೇ ಪುಸ್ತಕದ ಅಧ್ಯಾಯಗಳು ಮತ್ತು ಅದನ್ನು ಓದಿದವರು. ಎಲ್ಲರಿಗೂ ನಮ್ಮ ಧನ್ಯವಾದಗಳು. Video Index: 1 ಜೋಗಿ - ದಯವಿಟ್ಟು ಈ ಪುಸ್ತಕ ಓದಬೇಡಿ - 0:12 2 ಟಿಏನ್ ಸೀತಾರಾಮ್ - ಪ್ರಶ್ನೆಗೆ ತಕ್ಕ ಉತ್ತರವಲ್ಲ, ಉತ್ತರಕ್ಕೆ ತಕ್ಕ ಪ್ರಶ್ನೆ - 3:26 3 ಭಾವನಾ - ಒಂದು ಪ್ರೇಮದ ಕಥೆ - 7:14 4 ರಿಷಬ್ ಶೆಟ್ಟಿ - ಬೆಟ್ಟವೂ ಮಾಯವಾಗುವ ಕತೆಯಲ್ಲಿ ಉತ್ತರವಿದೆಯಾ? - 11:09 5 ಸುಮನ್ ನಗರ್ಕರ್ - ಲೈಫ್ಒಂದು ಪಾಸ್‍ವರ್ಡು - 13:21 6 ರಿಷಿ - ಸ್ಕೂಟರಿನ ಜಜ್ಜಿಹೋದ ಭಾಗ ಮತ್ತು ಪ್ರೀತಿಯ ನಜ್ಜು ಗುಜ್ಜು ಭಾಷೆ - 16:28 7 ರಾಧಿಕಾ ನಾರಾಯಣ್ - ಒಂದೇ ಬೆಂಕಿಕಡ್ಡಿ ಉಳಿದಿದೆ, ಬೆಳಕಿಗೇನು ಮಾಡುತ್ತೀರಿ? - 19:54 8 ವಸಿಷ್ಠ ಸಿಂಹ - ಲ್ಯಾಪ್ಟಾಪ್ ಮತ್ತು ಪ್ರೀತಿ! - 21:54 9 ಹರ್ಷಿಕಾ ಪೂಣಚ್ಚ - ಸ್ಟ್ರಾ ಬಳಸಿ ಕುಡಿಯೋದು ಕೊನೆ ಸಿಪ್ಪಾ! - 23:47 10 ಪ್ರಮೋದ್ ಶೆಟ್ಟಿ - ಎಲ್ಲಾ ಮರೆತು ಚಪ್ಪಾಳೆ ತಟ್ಟಿ - 26:11 11 ಸಂಯುಕ್ತ ಹೊರನಾಡ್ - ಸೀಟ್ ಫಿಲಾಸಫಿ - 29:08 12 ಸಿಹಿ ಕಹಿ ಚಂದ್ರು - ಸ್ವಂತದ್ದು ಸ್ವಭಾವ, ಬಂದದ್ದು ಪ್ರಭಾವ, ಬಿಟ್ಟದ್ದು ವಿಭಾವ - 31:48 13 ಮಂಡ್ಯ ರಮೇಶ್ - ಸಂಗಾತಿ ಅಳತೆ ಕೊಟ್ಟು ಹೊಲೆಸೋದಲ್ಲ, ಪ್ರೀತಿ ಕೊಟ್ಟು ಉಳಿಸಿಕೊಳ್ಳೋದು! - 41:58 14 ರಾಜೇಂದ್ರ ಕಾರಂತ - ಈಗ ಹೇಳಿ, ಮೊದಲ ಕಥೆಗೆ ಏನು ಉತ್ತರ? - 45:08 15 ಸಂಚಾರಿ ವಿಜಯ್ - ಒತ್ತಕ್ಷರದ ಪ್ರೀತಿ ಮತ್ತು ಗೇರುಮರದ ...